ಬೆಂಗಳೂರು : ಬೆಂಗಳೂರಿನಲ್ಲಿ ನಡೆದ 11ನೇ ಕಾಮನ್ವೆಲ್ತ್ ಸಂಸದೀಯ ಸಂಘ - ಭಾರತ ವಿಭಾಗದಿಂದ ಮೂರು ದಿನಗಳ ಸಮ್ಮೇಳನದಲ್ಲಿ ಕೊನೆಯ ದಿನ ಗಣ್ಯರಿಗೆ ಸಂಸದೀಯ ಮಾರ್ಗದರ್ಶಿ ಜ್ಞಾನಶೇಖರನ್ ವಿಧಾನಸೌಧ ಕುರಿತು ಮಾಹಿತಿ ನೀಡಿದರು.

ಸೆಪ್ಟೆಂಬರ್ 11 ರಿಂದ 13 ರವರೆಗೆ ಆಯೋಜಿಸಲಾಗಿದ್ದ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದವರಿಗೆ ವಿಧಾನಸೌಧ ನಿರ್ಮಾಣ, ಕರ್ನಾಟಕದ ಸಂಸದೀಯ ಇತಿಹಾಸ, ಮಹತ್ವದ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿ ಗಮನ ಸೆಳೆದರು.

ಮೂರು ದಿನಗಳ ಈ ಸಮ್ಮೇಳನವನ್ನು ಗುರುವಾರ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಉದ್ಘಾಟಿಸಿದ್ದರು. 26 ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 45 ಶಾಸನ ಸಭಾಧ್ಯಕ್ಷರು (ನಾಲ್ವರು ವಿಧಾನ ಪರಿಷತ್ತಿನ ಸಭಾಪತಿಗಳು, 22 ಮಂದಿ ವಿಧಾನಸಭೆಯ ಅಧ್ಯಕ್ಷರು. ಮೂವರು ಉಪಸಭಾಪತಿಗಳು ಮತ್ತು 16 ಮಂದಿ ಉಪಸಭಾಧ್ಯಕ್ಷರು) ಭಾಗವಹಿಸಿದ್ದರು.