ಡಾ ವೆಂಕಟೇಶ್ ಬಾಬು ಮಾತನಾಡುತ್ತಾ, “ವಾಣಿಜ್ಯ ಶಿಕ್ಷಣವೇ ಆರ್ಥಿಕ ಜ್ಞಾನವನ್ನು ಹತ್ತಿರದಿಂದ ಅರಿಯಲು ದಾರಿ ತೋರಿಸುವ ಪ್ರಮುಖ ಬಾಗಿಲು. ಇಂದು ಉದ್ಯೋಗ, ಉದ್ಯಮ, ಹಣಕಾಸು ನಿರ್ವಹಣೆ ಮೊದಲಾದ ಎಲ್ಲ ಕ್ಷೇತ್ರಗಳಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗೆ ಅಪಾರ ಅವಕಾಶಗಳಿವೆ” ಎಂದು ತಿಳಿಸಿದರು. ವಾಣಿಜ್ಯ ಶಿಕ್ಷಣವು ಜ್ಞಾನ, ನೈಪುಣ್ಯ ಹಾಗೂ ನೈತಿಕತೆಯ ಸಮನ್ವಯವಾಗಿದ್ದು, ಹೊಸತನ್ನು ಕಲಿಯುವ ಕುತೂಹಲವನ್ನು ಹುಟ್ಟುಹಾಕುತ್ತದೆ ಎಂದರು.

ವಾಣಿಜ್ಯ ವಿಷಯವನ್ನು ಕಲಿಯಲು ಬೇಕಾದ ಕೌಶಲ್ಯಗಳನ್ನು ಕಲಿತು ಆಧುನಿಕ ತಂತ್ರಜ್ಞಾನಕ್ಕೆ ಪೂರಕವಾದ ಮಾಹಿತಿ ಕಾರ್ಪೊರೇಟ್ ಜಗತ್ತಿನ ಆಳಬಹುದು ಎಂದು ವಿದ್ಯಾರ್ಥಿಗಳಿಗೆ ಉದಾಹರಣೆಗಳ ಮೂಲಕ ಹುರಿದುಂಬಿಸಿದರು
ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಶ್ರೀ ಸಿ.ಎಚ್. ಮುರಗೆಂದ್ರಪ್ಪ ಅವರು ಮಾತನಾಡುತ್ತಾ, ವಿದ್ಯಾರ್ಥಿಗಳು ಭವಿಷ್ಯವನ್ನು ದೃಷ್ಟಿ ಪೂರಕವಾಗಿ ರೂಪಿಸಬೇಕು. ಶಿಕ್ಷಣವು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ವಿದ್ಯಾರ್ಥಿಗಳು ತಾವು ಹೇಗಿರಬೇಕು ಎಂಬ ಕನಸು ಕಾಣುವುದಷ್ಟೇ ಅಲ್ಲ, ಅದನ್ನು ಸಾಧಿಸುವ ದೃಢ ನಿರ್ಧಾರವೂ ಇರಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಚಂದ್ರಪ್ಪ ಡಿ. ಪ್ರಾಂಶುಪಾಲರು, ಭದ್ರಾ ಪದವಿ ಪೂರ್ವ ಕಾಲೇಜು ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರೊ. ಟಿ. ಮಾರುಗೇಶ ಪ್ರಾಂಶುಪಾಲರು, ಭದ್ರಾ ಪದವಿ ಕಾಲೇಜು , ಶ್ರೀ ಎಂ. ಸಂಕೇತ್ ಲಕ್ಷ್ಮಿ ನವೀನ್ ಸುಮ ಉಪಸ್ಥಿತರಿದ್ದರು.