LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಸೀಮಿತ ಆವೃತ್ತಿಯ ಕೋಕಾ-ಕೋಲಾ ಕಲರ್-ಚೇಂಜಿಂಗ್ ಕಪ್ಗಳನ್ನು ಉಚಿತವಾಗಿ ಪಡೆಯುವ ಅವಕಾಶ

ಮೆಕ್‌ಡೊನಾಲ್ಡ್ಸ್ ಇಂಡಿಯಾ ಸಲದ ನವರಾತ್ರಿಯನ್ನು ರಂಗು-ರಂಗಾಗಿಸಲಿದೆ

 

ಬೆಂಗಳೂರು: ಮೆಕ್‌ಡೊನಾಲ್ಡ್ಸ್ ಇಂಡಿಯಾ (ಪಶ್ಚಿಮ ಮತ್ತು ದಕ್ಷಿಣ) ತನ್ನ ಅಭಿಮಾನಿಗಳಿಗೆ ಈ ಸಲ ನವರಾತ್ರಿಗೆ ರಂಗು-ರಂಗಿನ ಸಡಗರವನ್ನು ನೀಡಲಿದೆ. ಕೋಕಾ-ಕೋಲಾ ಜೊತೆ ಕೈಗೂಡಿಸಿರುವ ಮೆಕ್‌ಡೊನಾಲ್ಡ್ಸ್ ಇಂಡಿಯಾ, ಕೋಕಾ-ಕೋಲಾ ಕಲರ್-ಚೇಂಜಿಂಗ್ ಕಪ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಮೊದಲ ಬಾರಿಗೆ ಪರಿಚಯಿಸುತ್ತಿದೆ. ಆದರೆ ಇದು, ಸೀಮಿತ ಅವಧಿಗೆ ಮಾತ್ರ - ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 2, 2025 ರವರೆಗೆ. ಮುಂಬೈ ಮತ್ತು ಬೆಂಗಳೂರಿನ ಮೆಕ್‌ಡೊನಾಲ್ಡ್ಸ್ ರೆಸ್ಟೋರೆಂಟ್‌ಗಳಲ್ಲಿ ಈ ವಿಶೇಷವಾದ, ಸೀಮಿತ ಆವೃತ್ತಿಯ ಕಪ್‌ಗಳು ದೊರೆಯುತ್ತವೆ.

 

ಆಯ್ದ ಮೆಕ್‌ಡೊನಾಲ್ಡ್ಸ್ ಲಾರ್ಜ್ ಮೀಲ್ಸ್ ಖರೀದಿಸುವ ಗ್ರಾಹಕರಿಗೆ ಕಲರ್ ಚೇಂಜಿಂಗ್ ಕಪ್ ಉಚಿತವಾಗಿ ದೊರೆಯುತ್ತದೆ. ಮೆಕ್‌ಡೆಲಿವರಿ, ಸ್ವಿಗ್ಗಿ ಅಥವಾ ಜೊಮಾಟೊ ಮೂಲಕ ಆಯ್ದ  ಮೀಡಿಯಮ್ ಬರ್ಗರ್‌ ಮೀಲ್ ಗಳನ್ನು ಖರೀದಿಸುವವರಿಗೂ ಈ ಕಪ್ ಗಳು ಉಚಿತವಾಗಿ ದೊರೆಯುತ್ತವೆ.



ಈ ಸೀಮಿತ ಆವೃತ್ತಿಯಲ್ಲಿ ಆರು ಆಕರ್ಷಕ ಬಣ್ಣಗಳ - ಹಳದಿ, ಕೆಂಪು, ನೀಲಿ, ಹಸಿರು, ಗುಲಾಬಿ ಮತ್ತು ಬೂದು - ಲೋಹದ ಕಪ್‌ಗಳಿರುತ್ತವೆ. ಇವುಗಳಲ್ಲಿ ತಂಪಾದ ಕೋಕಾ-ಕೋಲಾ ಅಥವಾ ಇತರ ಪಾನೀಯಗಳನ್ನು ತುಂಬಿಸಿದರೆ ಆಗ ಈ ಕಪ್ ಗಳ ಬಣ್ಣ ಬದಲಾಗುತ್ತದೆ.

 

ಈ ಆಕರ್ಷಕವಾದ ಕಪ್‌ಗಳನ್ನು ಉಚಿತವಾಗಿ ಪಡೆಯಲು: ರೆಸ್ಟೋರೆಂಟ್ ನಲ್ಲಿ ಸೆಲೆಕ್ಟ್ ಲಾರ್ಜ್ ಮೀಲ್ಸ್‌ ಖರೀದಿಸಿ; ಅಥವಾ ಮೆಕ್‌ಚೀಸ್ ವೆಜ್/ಚಿಕನ್, ಮೆಕ್‌ಸ್ಪೈಸಿ ಪ್ರೀಮಿಯಂ ವೆಜ್/ಚಿಕನ್, ಅಥವಾ ಮಹಾರಾಜ ಮ್ಯಾಕ್ ವೆಜ್/ಚಿಕನ್ ನಂತಹ ಆಯ್ದ ಮೀಡಿಯಂ ಮೀಲ್ಸನ್ನು ಡೆಲಿವರಿ ಮೂಲಕ ಖರೀದಿಸಿ.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ