
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಗುರುವಾರ ಅವರನ್ನು ಭೇಟಿ ಮಾಡಿ, ಈ ಬಾರಿ ನಮ್ಮ ಜಿಲ್ಲೆಯಲ್ಲಿ ಕನ್ನಡಾಂಬೆಯ ಸೇವೆ ಮಾಡಲು, ನಮ್ಮೆಲ್ಲರಿಗೂ ಅವಕಾಶ ದೊರೆತಿದ್ದು,ಅತ್ಯಂತ ಸಂತಸ ಮೂಡಿಸಿದೆ. ಎಲ್ಲ ಕನ್ನಡಪರ ಸಂಘಂಟನೆಗಳು, ಸಾಹಿತ್ಯಾಸಕ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅದ್ದೂರಿಯಾಗಿ ಹಬ್ಬದಂತೆ ಸಮ್ಮೇಳನವನ್ನು ಆಚರಿಸೋಣ, ಈಗಿನಿಂದಲೇ ಸಮ್ಮೇಳನ ಆಯೋಜನೆ ಕುರಿತು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವ ಮೂಲಕ ಬಳ್ಳಾರಿಯಲ್ಲಿ ಇತಿಹಾಸ ಸೃಷ್ಟಿಸೋಣ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.