ಮರಿಯಮ್ಮನಹಳ್ಳಿ: ಶಿಬಿರಗಳು ಮಕ್ಕಳ ಬೌದ್ಧಿಕ ವಿಕಸನಕ್ಕೆ ಸಹಕಾರಿಯಾಗಿದ್ದು, ಪಾಲಕ, ಪೋಷಕರು ಮಕ್ಕಳಿಗೆ ಶಿಬಿರಗಳ ಮಹತ್ವ ಕುರಿತು ಅರಿವು ಮೂಡಿಸುವಂತೆ ಪದ್ಮಶ್ರಿ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ಸಲಹೆ ನೀಡಿದರು. ಅವರು ಪಟ್ಟಣದ ದುರ್ಗಾದಾಸ ಕಲಾಮಂದಿರದಲ್ಲಿ ಇಲ್ಲಿನ ರಂಗಚೇತನಾ ಕಲಾಟ್ರಸ್ಟ್ ನಿಂದ ಶುಕ್ರವಾರ ಮಸ್ತ್ ಮಜಾ- ಮಕ್ಕಳ ರಜಾ ಬೇಸಿಗೆ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳು ಶಿಬಿರದ ನಿರ್ದೇಶಕರ ಮಾರ್ಗದರ್ಶನ ಪಾಲಿಸುವ ಮೂಲಕ ಸಂಪೂರ್ಣ ತೊಡಗಿಸಿಕೊಂಡು ಸದುಪಯೋಗ ಪಡಿಸಿಕೊಳ್ಳಿ ಎಂದರು.
ಎಲಿಗಾರ ದೊಡ್ಡ ಮಂಜುನಾಥ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಬಿಎಂಎಸ್ ಮೃತ್ಯುಂಜಯ, ಲಲಿತಾ ಕಲಾ ರಂಗದ ಅಧ್ಯಕ್ಷ ಹುರುಕೊಳ್ಳಿ ಮಂಜುನಾಥ, ಪ.ಪಂ.ಸದಸ್ಯ ಬಿಎಂಎಸ್ ರಾಜೀವ್, ಕರ್ನಾಟಕ ನಾಟಕ ಅಕಾಡೆಮಿ ಪುರಸ್ಕೃತ ಬಿಎಂಸ್ ಪ್ರಭು, ಪತ್ರಕರ್ತ ಗೌಳೇರ ನಾಗರಾಜ್, ಕಾಸ್ಲಿ ಬಾಲು, ಶಿಬಿರದ ನಿರ್ದೇಶಕ ಮಜಾ ಭಾರತ ಹಾಗೂ ಕಾಮಿಡಿ ಕಿಲಾಡಿಗಳು ಮೆಂಟರ್ ಬಿಎಂ ಯೋಗೀಶ್ ಇದ್ದರು. ಕಲಾವಿದರಾದ ಮಂಜುನಾಯ್ಕ, ಅನಿಲ್ ಆಚಾರಿ ಕಾರ್ಯಕ್ರಮ ನಿರ್ವಹಿಸಿದರು.