ಪಟ್ಟಣ ಪಂಚಾಯಿತಿಯ ಮಾಜಿ ಉಪಾಧ್ಯಕ್ಷೆಯಾದ ಸರ್ವಮಂಗಳಉಮಾಪತಿ ಇವರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬೋಸಮ್ಮ ಮಂಜುನಾಥ ನಾಮಪತ್ರವನ್ನು ಸಲ್ಲಿಸಿದರು. ಅವರ ವಿರುದ್ಧ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ತಹಶೀಲ್ದಾರ್ ರೆಹಾನ್ಪಾಷ ಘೋಷಿಸಿದರು.
ನೂತನ ಉಪಾಧ್ಯಕ್ಷೆ ಪಿ.ಬೋಸಮ್ಮಮಂಜುನಾಥ ಮಾತನಾಡಿ ಅವಿರೋಧವಾಗಿ ಆಯ್ಕೆಮಾಡಿದಂತಹ ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ, ಪಟ್ಟಣ ಪಂಚಾಯಿತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರಿಗಳಿಗೆ, ಕಾಂಗ್ರೆಸ್ ಮುಖಂಡರುಗಳಿಗೆ, ತಳಕು-ನಾಯಕನಹಟ್ಟಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾಗೇಶ್ರೆಡ್ಡಿ, ಮಲ್ಲೂರಹಟ್ಟಿ ತಿಪ್ಪೇಸ್ವಾಮಿ, ಬೋರನಾಯಕ, ಡಿ.ಧನಂಜಯ, ರ್ರಿಸ್ವಾಮಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಸಾರ್ವಜನಿಕರಿಗೆ ಯಾವುದೇ ಸಮಸ್ಯೆಗಳು ಬಂದರೆ ಬಗೆಹರಿಸುತ್ತೇನೆ ಎಂದರು.

16ಜನ ಸದಸ್ಯರಲ್ಲಿ 14 ಕಾಂಗ್ರೆಸ್ ಪಕ್ಷದ ಸದಸ್ಯರು, ಎರಡು ಬಿ.ಜೆ.ಪಿ. ಪಕ್ಷದ ಸದಸ್ಯರು, ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯೆ ಸುನಿತಮುದಿಯಪ್ಪ ಮತ್ತು ಬಿ.ಜೆ.ಪಿ. ಪಕ್ಷದ ಸದಸ್ಯ ಎನ್.ಮಹಂತಣ್ಣ ಗೈರು ಹಾಜರಾಗಿದ್ದರು.
ಚುನಾವಣೆ ಅಧಿಕಾರಿಯಾಗಿ ಚಳ್ಳಕೆರೆ ತಹಶೀಲ್ದಾರ್ ರೆಹಾನ್ಪಾಷ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಓ.ಶ್ರೀನಿವಾಸ್, ಸಿ.ಪಿ.ಐ. ಹನುಮಂತಪ್ಪ ಶೀರಹಳ್ಳಿ, ನಾಯಕನಹಟ್ಟಿ ಪೊಲೀಸ್ಠಾಣೆ ಪಿ.ಎಸ್.ಐ. ಪಾಂಡುರಂಗಪ್ಪ, ಎ.ಎಸ್.ಐ.ತಿಪ್ಪೇಸ್ವಾಮಿ, ಪೇದೆಗಳಾದ ಅಣ್ಣಪ್ಪನಾಯಕ, ಪೊಲೀಸ್ ಸಿಬ್ಬಂದಿಗಳು, ಸಂದೀಪ್, ತಿಪ್ಪೇಸ್ವಾಮಿ, ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳಶ್ರೀಕಾAತ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ತಿಪ್ಪೇಸ್ವಾಮಿ, ಸದಸ್ಯರುಗಳಾದ ಸೈಯದ್ಅನ್ವರ್, ಜಾಗನೂರಹಟ್ಟಿ ಎಂ.ಟಿ.ಮಂಜುನಾಥ, ಈರಮ್ಮ, ಪಾಪಕ್ಕ, ಮಹೇಶ್ವರಿ, ಅಬಕಾರಿ ತಿಪ್ಪೇಸ್ವಾಮಿ, ಜೆ.ಆರ್.ರವಿಕುಮಾರ್, ಪೆದ್ದನಓಬಯ್ಯ, ಗುರುಶಾಂತಮ್ಮ, ವಿನುತ, ಸರ್ವಮಂಗಳಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ರೆಡ್ಡಿ, ಎತ್ತಿನಹಟ್ಟಿ ಗೌಡ್ರು, ಮಲ್ಲೂರಹಟ್ಟಿ ತಿಪ್ಪೇಸ್ವಾಮಿ, ಜಿ.ಎಂ.ತಿಪ್ಪೇಸ್ವಾಮಿ ಮತ್ತಿತರರು ಹಾಜರಿದ್ದರು.