
ಬೈಕ್ ಸವಾರನು ಕಮಲಾಪುರ ಕಡೆಯಿಂದ ಹೊಸಪೇಟೆ ಕಡೆ ಹೋಗುತ್ತಿರುವಾಗ ಅನಂತಶಯನಗುಡಿ ಹತ್ತಿರ ರಸ್ತೆಯ ಪಕ್ಕದಲ್ಲಿ ನೀರಿನ ಪೈಪ್ ಹಾಕಲು ಸುಮಾರು 9 ಅಡಿ ಆಳದ ಗುಂಡಿಯನ್ನು ತೆಗೆದಿದ್ದರು. ಆ ಗುಂಡಿಯಲ್ಲಿ ಬೈಕ್ ಸವಾರನು ಆಯಾತಪ್ಪಿ ಬಿದ್ದಿದ್ದನು. ಆಗ ಅಲ್ಲಿ ಜನರು ನೋಡಿ 108 ಗೆ ಕರೆ ಮಾಡಿದರು. ತಕ್ಷಣವೇ ಸರಿಯಾದ ಸಮಯಕ್ಕೆ 108 ಅಂಬುಲೆನ್ಸ್ ಸಿಬ್ಬಂದಿಗಳು ಬಂದು 9 ಅಡಿ ಆಳದ ಗುಂಡಿಯೊಳಗೆ ಇಳಿದು ಆತನನ್ನು ರಕ್ಷಣೆ ಮಾಡಿ ಅಂಬುಲೆನ್ಸ್ ನಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ. ಮತ್ತು ಆ ಸವಾರನ ಬ್ಯಾಗ್ ಇತರೆ ವಸ್ತುಗಳನ್ನು ಆತನ ತಮ್ಮನಿಗೆ ಒಪ್ಪಿಸಿದ್ದಾರೆ.