ಬಳ್ಳಾರಿ: ಅಂತರಾಷ್ಟ್ರೀಯ ರ್ಪಲ್ ಪೆಸ್ಟ್ ಗೋವಾ 2025 ರ ಅಂಗವಾಗಿ ಅಕ್ಟೋಬರ್ 9ರಿಂದ 12ರ ವರೆಗೆ ಪಣಜಿಯ ಡಾನ್ ಬಾಸ್ಕೋ ಶಾಲೆಯ ಬಾಸ್ಕೆಟ್ ಬಾಲ್ ಅಂಕಣದಲ್ಲಿ ಜರುಗಿದ ವೀಲ್ ಚೇರ್ ಬಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ಕರ್ನಾಟಕ ತಂಡ ಅದ್ಭುತ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದುಕೊಂಡಿತು.
ಈ ಪಂದ್ಯಾವಳಿಯಲ್ಲಿ ತಮಿಳುನಾಡು, ಪಾಂಡಿಚೇರಿ, ದೆಹಲಿ ಹಾಗೂ ಕರ್ನಾಟಕ ತಂಡ ಭಾಗವಹಿಸಿದ್ದವು. ಲೀಗ್ ಹಂತದ ಪಂದ್ಯಗಳಲ್ಲಿ ಕರ್ನಾಟಕ ತಂಡ ಪಾಂಡಿಚೇರಿ ಮತ್ತು ತಮಿಳುನಾಡು ತಂಡಗಳನ್ನು ಸೋಲಿಸಿ ಫೈನಲ್ ಗೆ ಪ್ರವೇಶ ಪಡೆದುಕೊಂಡಿತ್ತು. ಫೈನಲ್ (ಅಂತಿಮ)ಪಂದ್ಯದಲ್ಲಿ ದೆಹಲಿ ತಂಡದೊಂದಿಗೆ ತೀವ್ರ ಪೈಪೋಟಿ ರ್ಪಟ್ಟು ಸೆಣಸಾಟ ನಡೆಸಿ ಕೊನೆಯಲ್ಲಿ 33:30 ಅಂಕಗಳಿಂದ ದೆಹಲಿ ತಂಡವನ್ನು ಸೋಲಿಸಿ ರ್ನಾಟಕ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು. ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ರ್ನಾಟಕ ತಂಡಕ್ಕೆ ನಗದು ಬಹುಮಾನ ಹಾಗೂ ಪ್ರಶಸ್ತಿಯನ್ನು ರ್ಪಲ್ ಪೆಸ್ಟ್ ವತಿಯಿಂದ ನೀಡಲಾಯಿತು.
ಈ ಸಮಯದಲ್ಲಿ ಕರ್ನಾಟಕ ರಾಜ್ಯ ವೀಲ್ ಚೇರ್ಬಾಸ್ಕೆಟ್ ಬಾಲ್ ಕಾರ್ಯದರ್ಶಿ ಸಂಜೀವ್ ಹಜೇರಿ, ತಂಡದ ಕ್ರೀಡಾ ಪಟುಗಳಾದ ಸಿದ್ದಪ್ಪ ಪಟಗುಂದಿ, ಫಕೀರಪ್ಪ ಕರವಿನಕೊಪ್ಪ, ರವಿ ಚೌಹಾನ್ ಮಾರುತಿ ಕೊಪ್ಪದ, ಸೋಮಶೇಖರ, ಗಂಗರಾಜು ಪ್ರಕಾಶ, ಕೊಟ್ರೇಶ ಹಾಗೂ ಲಕ್ಷ್ಮಣ ಮದರ್ ಇದ್ದರು.