ಮರಿಯಮ್ಮನಹಳ್ಳಿ: ಮಕ್ಕಳ ಶಾಲಾ ಪೂರ್ವ ಶಿಕ್ಷಣದ ಬಗ್ಗೆ ಸಮುದಾಯದಲ್ಲಿ ಅರಿವು ಮೂಡಿಸಲು ಬಾಲ ಮೇಳ ಸಹಕಾರಿ ಎಂದು ಪ.ಪಂ. ಉಪಾಧ್ಯಕ್ಷೆ ರೋಗಣ್ಣ ನವರ ಲಕ್ಷ್ಮೀ ಮಂಜುನಾಥ ಹೇಳಿದರು.
ಅವರು ಪಟ್ಟಣದ 9ನೇ ವಾರ್ಡ್ ನ ವಾಲ್ಮೀಕಿ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಜಯನಗರ, ಶಿಶು ಅಭಿವೃದ್ಧಿ ಯೋಚನಾಧಿಕಾರಿಗಳ ಕಾರ್ಯಾಲಯ ಹೊಸಪೇಟೆ ಹಾಗೂ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಬಾಲ ಮೇಳ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಶಾಲಾ ಪೂರ್ವ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿದ್ದ ವಿವಿಧ ಚಟುವಟಿಕೆಗಳು ನೆರೆದಿದ್ದ ಪಾಲಕ ಪೋಷಕರ ಗಮನ ಸೆಳೆದವು.
ಈ ಸಂದರ್ಭದಲ್ಲಿ ಎಸಿಡಿಪಿಒ ವನಮಾಲ, ಮೇಲ್ವಿಚಾರಕರಾದ ಅಂಬುಜಾ, ರೇಣುಕ ಎಲ್ಲಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ಉಮಾದೇವಿ, ಪ್ರಮೀಳಾ, ಮಂಜುಳಾ, ನೀಲಮ್ಮ, ಸಿ ಆರ್.ಪಿ. ಕರಿಬಸಪ್ಪ ಇತರರು ಇದ್ದರು.