LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಪೆಟ್ರೋಲಿಯಂ ದರಗಳ ಏರಿಕೆ ನಡುವೆ, ವಿದ್ಯುನ್ಮಾನ ವಾಹನಗಳಿಗೆ ಸುಗ್ಗಿ

ಬೆಂಗಳೂರು:  ಪೆಟ್ರೋಲಿಯಂ ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ದೇಶಾದ್ಯಂತ ದ್ವಿಚಕ್ರ ವಾಹನ ವಲಯದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಪರಿವರ್ತನೆಯಾಗುತ್ತಿರುವುದು ಕಂಡು ಬಂದಿದೆ. ಪರಿವರ್ತನೆಯನ್ನು ಇನ್ನಷ್ಟು ಸುಲಭ ಮತ್ತು ಲಾಭದಾಯಕವಾಗಿಸುವ ಉದ್ದೇಶದಿಂದ ಕಿಲ್ ದಿ ಪೆಟ್ರೋಲ್ ಬಿಲ್ ಯೋಜನೆಯಡಿ ಅಲ್ಟ್ರಾ ವೈಯಲೆಟ್ ಪರಿವರ್ತನಾ ಸಂಸ್ಥೆ ವಾಹನ ಬಳಕೆಗೆ ಒತ್ತು ನೀಡಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗುವುದರಿಂದ ಸಿಗುವ ಆರ್ಥಿಕ ಲಾಭ ಮತ್ತು ಕಾರ್ಯಕ್ಷಮತೆಯ ಪ್ರಯೋಜನಗಳ ಬಗ್ಗೆ ಗ್ರಾಹಕರಲ್ಲಿ ಅರಿವು ಅಲ್ಟ್ರಾ ವೈಯಲೆಟ್ ಪರಿವರ್ತನಾ ಸಂಸ್ಥೆಯು ಮೂಡಿಸುತ್ತಿದೆ. 

ಯೋಜನೆಯಡಿ, ಸವಾರರು ತಮ್ಮ ಹಿಂದಿನ ವಾಹನ ಚಾಲನೆಯ ಇತಿಹಾಸ ಮತ್ತು ಬಳಕೆಯ ಆಧಾರದ ಮೇಲೆ ಲೆಕ್ಕಾಹಾಕಿದರೆ ಇವಿ , ದ್ವಿಚಕ್ರ ವಾಹನ ಖರೀದಿಯಿಂದ ಗರಿಷ್ಠ ವಾರ್ಷಿಕ ₹30,000 ವರೆಗಿನ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. -ವಾಹನಗಳಿಂದ ಕಾರ್ಯಕ್ಷಮತೆ ಹೆಚ್ಚಾಗುವ ಜೊತೆಗೆ ಆಧುನಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿ, ಗ್ರಾಹಕರಲ್ಲಿವಿಶ್ವಾಸಾರ್ಹತೆ ತರುವ ಕೆಲಸ ಮಾಡುತ್ತಿದೆ.

ಕುರಿತು ಮಾತನಾಡಿದ, ಅಲ್ಟ್ರಾ ವೈಯಲೆಟ್ ಸಂಸ್ಥೆಯ ಸಿಇಒ  ಮತ್ತು ಸಹ-ಸಂಸ್ಥಾಪಕ ನಾರಾಯಣ್ ಸುಬ್ರಮಣಿಯಂ, ಗ್ರಾಹಕರು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಬದಲಾಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇವಿ ಪರಿವರ್ತನೆಯನ್ನು ವೇಗಗೊಳಿಸುವ ದೃಷ್ಟಿಕೋನಕ್ಕೆ ಅನುಗುಣವಾಗಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಎಲೆಕ್ಟ್ರಿಕ್ ವಾಹನ ಕ್ಷೇತ್ರ ಮತ್ತಷ್ಟು ಬೆಳೆಯುತ್ತಿರುವ ಹಿನ್ನೆಲೆಯಲ್ಲಿ, ದೇಶಾದ್ಯಂತ ದ್ವಿಚಕ್ರ ವಾಹನ ಸವಾರರಿಗೆ ಬದಲಾವಣೆಯನ್ನು ಹೆಚ್ಚು ಸುಲಭ ಮತ್ತು ಲಾಭದಾಯಕವಾಗಿಸುವ ಮೂಲಕ ವಿಗಳ ಬಳಕೆಯನ್ನು ವೇಗಗೊಳಿಸುವ ಕಡೆಗೆ ನಮ್ಮ ಗಮನ ಮುಂದುವರಿದಿದೆ" ಎಂದು ಹೇಳಿದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ