ಚಿತ್ರದುರ್ಗ : ಜಿಲ್ಲೆ ಹೊಳಲ್ಕೆರೆ ತಾಲೂಕು ಕೆರೆಯಾಗಳ ಹಳ್ಳಿ ಗ್ರಾಮದಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಜನ್ಮ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಲೋಕಾಯುಕ್ತರಾದ ನರಸಿಂಹಮೂರ್ತಿ ಅವರು ಮಾತನಾಡಿ ಅಂಬೇಡ್ಕರ್ ಅವರ ಜೀವನ ಚರಿತ್ರೆಯ ಬಗ್ಗೆ ಉಪನ್ಯಾಸ ನೀಡಿದರು ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ತಾಲೂಕ ಅಧ್ಯಕ್ಷರಾದ ನಾಗರಾಜ್ ಕೆರೆಯಾಗಳ ಹಳ್ಳಿ ಇವರು ಮಾತನಾಡಿ ಅಂಬೇಡ್ಕರ್ ಅವರು ತೆಗೆದುಕೊಂಡ ನಿರ್ಧಾರಗಳು ಮತ್ತು ಅವರು ಜನಸಾಮಾನ್ಯರಿಗೆ ಕೊಟ್ಟಂತ ಕಾನೂನಾತ್ಮಕ ಸಲಹೆಗಳ ಬಗ್ಗೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಪೋಸ್ಟ್ ಮಾಸ್ಟರ್ ಪಿಸಿ ಕೆಂಚಪ್ಪ ಮಾತನಾಡಿ ಅಂಬೇಡ್ಕರ್ ರವರ ಚರಿತ್ರೆ ಬಗ್ಗೆ ವಿಶ್ಲೇಷಣೆ ನೀಡಿದರು ಈ ಸಂದರ್ಭದಲ್ಲಿ ಊರಿನ ಮುಖಂಡರಾದ ಬಾಲಾಜಿ ಟ್ರೇಡರ್ಸ್ ಮಾಲೀಕರಾದ ರಂಗಧಾಮ ಯುವ ಮುಖಂಡರಾದ ಷಣ್ಮುಖ ಗೌಡ ಕಾಂಗ್ರೆಸ್ ಮುಖಂಡರಾದ ರಂಗಸ್ವಾಮಿ ಓ ರಂಗಪ್ಪ ರೈತ ಮುಖಂಡರಾದ ಬಿ ಬಿ ಗೋವಿಂದರಾಜು ವಕೀಲರಾದ ಚೇತನ್ ಕುಮಾರ್ ಊರಿನ ಹಿರಿಯರಾದ ರಾಜಣ್ಣ ಕಮರಪ್ಪ ಗುರುಮೂರ್ತಿ ಗ್ರಾಮ ಪಂಚಾಯತಿಯ ಮಾಜಿ ಸದಸ್ಯರಾದ ರಾಮಮೂರ್ತಿ ಕಲ್ಲೇಶಪ್ಪ ಕಲ್ಲಮ್ಮ ಚಿದಾನಂದಪ್ಪ ಟಿ ಚಂದ್ರಪ್ಪ ದಲಿತ ಮುಖಂಡರಾದ ಕೆ ಟಿ ರುದ್ರಪ್ಪ ರುದ್ರಪ್ಪ ದಯಾನಂದ್ ಸಿದ್ದೇಶ್ ಅನ್ನು ಮುಂತಾದವರು ಭಾಗವಹಿಸಿದ್ದರು