ಚುನಾವಣಾ ಆಯೋಗ ಚುನಾವಣೆ ನಡೆಸುವ ಮಾದರಿಯಲ್ಲಿಯೇ ಶಾಲೆಯಲ್ಲಿ ಚುನಾವಣಾ ಪ್ರಕ್ರಿಯೆಗಳನ್ನು ಆರಂಭಿಸಬೇಕು. ವಿದ್ಯಾರ್ಥಿ ನಾಯಕರ ಆಯ್ಕೆ ನಿಟ್ಟಿನಲ್ಲಿ ಪ್ರಕಟಣೆ ಹೊರಡಿಸಬೇಕು. ಸಚಿವರ ನೇಮಕ, ಮೀಸಲಾತಿ ವಿವರ, ಮತದಾನ ದಿನ, ನೋಟ ಮಾಹಿತಿ ನೀಡಿ ಮತದಾನಕ್ಕೆ ಸಜ್ಜುಗೊಳಿಸಬೇಕು. ಇವಿಎಂ ಯಂತ್ರ ಇಲ್ಲವೇ ಮತ ಪೆಟ್ಟಿಗೆ ಬಳಸಿ ಮತ ಚಲಾಯಿಸಲು ವ್ಯವಸ್ಥೆ ಮಾಡಬೇಕು. ನಂತರ ಮತ ಪ್ರಚಾರ, ಮತದಾನ, ಫಲಿತಾಂಶ ಘೋಷಣೆಗಳನ್ನು ನಿಯಮ ಬದ್ಧವಾಗಿ ನಡೆಸಬೇಕು. ಆ ಮೂಲಕ ಮಕ್ಕಳಿಗೆ ಮತದಾನದ ನೈಜ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಶಾಲೆಯಲ್ಲಿ ಚುನಾವಣಾ ತಯಾರಿ ನಡೆಸಬೇಕು.
ಮುಖ್ಯ ಶಿಕ್ಷಕ ಗಿರಿನಾಯ್ಕ್ ಮಾತನಾಡಿ, ‘ಇಲಾಖೆ ನಿಯಮದಂತೆ ಸಂಸತ್ ರಚನೆ ನಡೆಯಲಿದೆ. ಸಂವಿಧಾನದ ಆಶಯದಂತೆ ಚುನಾವಣೆ ಹೇಗೆ ಮತ್ತು ಏಕೆ ನಡೆಯುತ್ತವೆ. ಆಯ್ಕೆಯಾದ ಸದಸ್ಯರು ಮಾಡಬೇಕಾದ ಕರ್ತವ್ಯ, ಹಕ್ಕು, ಬಾಧ್ಯತೆಗಳ ಬಗ್ಗೆ ಶಾಲೆಯಲ್ಲಿ ಜಾಗೃತಿ ಮೂಡಿಸಲಾಯಿತು. 18 ಸಂಪುಟ ದರ್ಜೆಯ ಮಂತ್ರಿಗಳನ್ನು ಆಯ್ಕೆ ಮಾಡಲಾಗುತ್ತದೆ’ ಎಂದರು.
ಎರಡು ದಿನಗಳಿಂದ ಚುನಾವಣೆ ಪೂರ್ವಭಾವಿ ಸಭೆಗಳು ನಡೆದವು. ಶಿಕ್ಷಕರ ಮಾರ್ಗದರ್ಶನದಲ್ಲಿ ಶೈಕ್ಷಣಿಕ ಬೆಳವಣಿಗೆ ಮತ್ತು ಮಕ್ಕಳು ತಯಾರಿಸಿಕೊಂಡ ಅಜೆಂಡಾವನ್ನು ಮನವರಿಕೆ ಮಾಡಿಕೊಟ್ಟು ಮತ ನೀಡುವಂತೆ ಮಕ್ಕಳು ಸ್ನೇಹಿತರನ್ನು ಕೇಳಿಕೊಂಡರು. ಶಾಲಾ ಆವರಣದಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಯಂತ್ರದ ಮೂಲಕ ಮತ ಚಲಾಯಿಯಿಸಿದರು.

ಬಾಲಕ-ಬಾಲಕಿಯರು ತಮ್ಮ ಸ್ನೇಹಿತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ನಿಟ್ಟಿನಲ್ಲಿ ಮತಯಾಚಿಸಿದರು. ಹಣ ಸೇರಿದಂತೆ ಯಾವುದೇ ಆಮಿಷಕ್ಕೆ ಒಳಗಾಗುವುದು ಅಪರಾಧ ಎಂಬುದನ್ನು ತಿಳಿಸಿಕೊಟ್ಟರು. ಮಕ್ಕಳು ಸಡಗರ ಸಂಭ್ರಮದ ನಡುವೆ ಮತ ಎಣಿಕೆ ಕಾರ್ಯದಲ್ಲಿ ಭಾಗಿಯಾದರು. ವಿಜೇತರನ್ನು ಅಭಿನಂದಿಸಿದರು. ಮುಖ್ಯಮಂತ್ರಿ, ಶಿಕ್ಷಣ, ಸ್ವಚ್ಛತೆ, ನೀರಾವರಿ ಮಂತ್ರಿಗಳು ಆಯ್ಕೆಯಾದ ವಿವಿಧ ಮಜಲುಗಳನ್ನು ವೀಕ್ಷಿಸಿದರು.
‘ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ತಂದೆ-ತಾಯಿ, ನೆರೆಹೊರೆಯವರಿಗೆ ಮತದಾನ ನಮ್ಮ ಹಕ್ಕು ಎಂಬ ಬಗ್ಗೆ ಮಕ್ಕಳು ತಿಳಿಸಿಕೊಡಲಿದ್ದಾರೆ. ಮತದಾನ ನಿರ್ಲಕ್ಷಿಸದಂತೆ, ಇಷ್ಟವಿಲ್ಲದ ಸಂದರ್ಭದಲ್ಲಿ ‘ನೋಟ’ ಚಲಾಯಿಸುವ ಬಗ್ಗೆ ಅರಿವು ಮೂಡಿಸಲಿದ್ದಾರೆ. ಪ್ರಜಾತಂತ್ರದ ಹಬ್ಬ 5 ವರ್ಷಕ್ಕೆ ಒಮ್ಮೆ ಬರುತ್ತದೆ. ಮತದಾನ ಮಾಡಿ ಉತ್ತಮ ಪ್ರತಿನಿಧಿ ಆಯ್ಕೆ ಮಾಡಬಹುದು’ ಎಂಬ ವಿಷಯದ ಬಗ್ಗೆ ತಿಳಿಸಲು ಶಾಲಾ ಹಂತದಲ್ಲಿ ಚುನಾವಣೆ ನಡೆಸಲಾಗುತ್ತದೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ಹಿಸಿದ ಶಿಕ್ಷಕ ಪರ್ವತಯ್ಯ ಪಿ ಎಮ್ ಹೇಳಿದರು.
ಇದೆ ಸಂದರ್ಭದಲ್ಲಿ ಶಿಕ್ಷಕರಾದ ನಾಗರಾಜ್, ವೀರೇಶ ಜಿ ಎನ್, ಓಬಯ್ಯ ಡಿ ಪಿ , ಮೇಘಶ್ರೀ ಬಿ ಮತ್ತು ಬಿ.ಇಡಿ ಪ್ರಶಿಕ್ಷಣಾರ್ಥಿಗಳಾದ ಇಂದ್ರೇಶ್, ಜಗನ್ನಾಥ್ , ಶಿವಮ್ಮ , ನಾಗಾರ್ಜುನ, ಉಪೇಂದ್ರ ಉಪಸ್ಥಿತರಿದ್ದರು.