
ಎಪಿಎಂಸಿ ಪೊಲೀಸ್ ಠಾಣೆಯ ಎದುರಿನ ರಸ್ತೆಯಲ್ಲಿನ ಧಾನ್ಯ ಸಂಗ್ರಹಣೆಯ ಶೆಡ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಗಣ್ಯರಿಗೆ 100*50 ಅಡಿ ಅಳತೆಯ ಎಲ್ ಇ ಡಿ ಸ್ಟೇಜ್ ನಿರ್ಮಿಸುತ್ತಿದೆ. ಅಲ್ಲದೆ 25 ಸಾವಿರ ಕ್ಕೂ ಹೆಚ್ಚು ಜನ ಕುಳಿತು ನೋಡಲು ಚೇರ್ ಗಳ ವ್ಯವಸ್ಥೆ ಮಾಡಿದೆ.
ಬೆಂಗಳೂರು ರಸ್ತೆಯಿಂದ ಎಪಿಎಂಸಿ ಪ್ರವೇಶ ಮಾಡಿವ ಧ್ವಾರದಿಂದ ವೇದಿಕೆವರೆಗಿನ ರಸ್ತೆಯಲ್ಲಿ ಬಿಜೆಪಿ ಧ್ವಜಗಳು ಸಮಾವೇಶಕ್ಕೆ ಬರುವವರನ್ನು ಸ್ವಾಗತಿಸುತ್ತಿವೆ. ಬಂದವರಿಗೆ ಕುಡಿಯುವ ನೀರು ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗುತ್ತಿದೆ ಎಂದು ಈ ವ್ಯವಸ್ಥೆಯ ಉಸ್ತುವಾರಿ ವಹಿಸಿಕೊಂಡಿರುವ ಬುಡಾ ಮಾಜಿ ಅಧ್ಯಕ್ಷ ಪಿ.ಪಾಲಣ್ಣ, ಬಿಜೆಪಿ ಮುಖಂಡ ತಿಮ್ಮಪ್ಪ ತಿಳಿಸಿದರು.

ಸಮಾವೇಶಕ್ಕೆ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ, ಹಾವೇರಿ ಸಂಸದ ಬಸವರಾಜ್ ಬೊಮ್ಮಾಯಿ, ಪ್ರತಿಪಕ್ಷದ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ ಮೊದಲಾದವರು ಆಗಮಿಸಲಿದ್ದಾರೆಂದು ಇಂದು ಮಧ್ಯಾಹ್ನ ಸಮಾವೇಶದ ಸಿದ್ದತೆ ಪರಿಶೀಲನೆ ಮಾಡಿದ ಮುಖಂಡರುಗಳಾದ ಎನ್.ರವಿಕುಮಾರ್, ಬಿ.ಶ್ರೀರಾಮುಲು, ಜನಾರ್ಧನರೆಡ್ಡಿ, ಸೋಮಶೇಖರರೆಡ್ಡಿ ತಿಳಿಸಿದರು.