ಮುಷ್ಕರಕ್ಕೆ ಎ.ಐ.ಕೆ.ಕೆ.ಎಂ.ಎಸ್ ಬೆಂಬಲ
ಬಳ್ಳಾರಿ : ನಾಳೆ ಕಾರ್ಮಿಕ ಮತ್ತು ರೈತ ಸಂಘಟನೆಗಳಿಂದ ಕಾರ್ಮಿಕ ಮತ್ತು ರೈತ ವಿರೋಧಿ ನೀತಿಗಳ ವಿರುದ್ಧ ದೇಶವ್ಯಾಪಿ ನಡೆಯುತ್ತಿರುವ ಮುಷ್ಕರಕ್ಕೆ ಎ.ಐ.ಕೆ.ಕೆ.ಎಂ.ಎಸ್ ರೈತ ಸಂಘಟನೆ ಬೆಂಬಲ ನೀಡಿ, ಭಾಗವಹಿಸುತ್ತಿದ್ದು , ಅದರ ಕುರಿತು ಕೋಳೂರು ಗ್ರಾಮದಲ್ಲಿ ಪ್ರಚಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಗೋವಿಂದ್ ಮಾತನಾಡುತ್ತಾ ಇತ್ತೀಚೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ಮತ್ತು ರೈತ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿವೆ. ಈ ನೀತಿಗಳು ಸಂಪೂರ್ಣವಾಗಿ ದುಡಿದು ದೇಶವನ್ನು ಕಟ್ಟುತ್ತಿರುವ ವರ್ಗವನ್ನು ಸಂಪೂರ್ಣವಾಗಿ ನಾಶಮಾಡಲು ಹೊರಟಿರುವ ನೀತಿಗಳಾಗಿವೆ ಎಂದು ಆರೋಪಿಸಿದರು.
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.