ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಮೂಹ ಯೋಗಾಭ್ಯಾಸದಲ್ಲಿ ಭಾಗವಹಿಸಿ ಯೋಗದ ಮಹತ್ವವನ್ನು ಅನುಭವಿಸಿದರು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಯೋಗದ ಇತಿಹಾಸ, ಮಹತ್ವ ಹಾಗೂ ಪ್ರಯೋಜನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಲಾಯಿತು. ಮಕ್ಕಳಲ್ಲಿ ಯೋಗಪಟುತೆ ಹಾಗೂ ಆಸಕ್ತಿಯನ್ನು ಬೆಳೆಸುವ ಉದ್ದೇಶದಿಂದ ವಿವಿಧ ಯೋಗಾಸನಗಳ ಪ್ರದರ್ಶನವನ್ನು ನಡೆಸಲಾಯಿತು.

ಕಾರ್ಯಕ್ರಮದ ನಂತರ ಶಿಕ್ಷಕ ಮೊಮ್ಮದ್ ರಫಿ ಅವರು ಯೋಗದ ಮಹತ್ವದ ಬಗ್ಗೆ ಬೆಳಕು ಚೆಲ್ಲಿದರು. ಅವರು ಮಾತನಾಡುತ್ತಾ, “ಯೋಗ ನಮ್ಮ ಭಾರತೀಯ ಪರಂಪರೆಯ ಅಮೂಲ್ಯ ಕೊಡುಗೆ. ಇದು ದೇಹ, ಮನಸ್ಸು ಹಾಗೂ ಆತ್ಮದ ಏಕತೆಯನ್ನು ಸಾಧಿಸಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಯೋಗವನ್ನು ದೈನಂದಿನ ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು,” ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಪಾಲಕರು ಹಾಜರಿದ್ದರು. ಈ ಆಯೋಜನೆಯಿಂದ ಮಕ್ಕಳು ಯೋಗದ ಮಹತ್ವವನ್ನು ಅರಿತು, ಆರೋಗ್ಯದತ್ತ ಗಮನ ಹರಿಸಲು ಪ್ರೇರಿತರಾದರು.

ಈ ಸಂದರ್ಭದಲ್ಲಿ ಮುಖ್ಯ ಗುರು ಸಾವಿತ್ರಿ ಮಲ್ಲನಗೌಡ ಶಿಕ್ಷಕಿಯರಾದ ಪುಷ್ಪ ಶರಣಮ್ಮ ಶಿಕ್ಷಕರಾದ ಆಂಜನೇಯ ಅತಿಥಿ ಶಿಕ್ಷಕರಾದ ಶಾಮಿದ್ ಹಾಗೂ ಪತಾಂಜಲಿ ಯೋಗ ಸಂಸ್ಥೆಯ ಶರಣಪ್ಪ ಉರ್ಕಡ್ಲಿ ಸೇರಿದಂತೆ ಇತರರು ಉಪಸಧರಿದ್ದರು