ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಪ್ರಸಿದ್ಧಕಾಮಾಕ್ಷಿಪಾಳ್ಯ ವಾರ್ಡ್ ಕೆ.ಎಚ್ ಬಿ ಕಾಲೋನಿಯಲ್ಲಿರುವ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕನ್ನಡಿಗ ಪ್ರಧಾನಿಯಾಗಿದ್ದ ಎಚ್ ಡಿ ದೇವೇಗೌಡರಿಗೆ ಮತ್ತಷ್ಟು ಆರೋಗ್ಯ ದೊರೆಯಲಿ. ೧೦೮ ವರ್ಷಗಳ ಕಾಲ ಬಾಳಿ ಬದುಕಲಿ ಎಂದು ತೆಂಗಿನ ಕಾಯಿ ಹರಕೆ ತೀರಿಸಿದರು.

ಜಯಕುಮಾರ್ ಗೌಡ ಮಾತನಾಡಿ, ಕರುನಾಡ ಪ್ರಧಾನಿಯಾಗಿದ್ದ ದೇವೇಗೌಡರು ಕರ್ನಾಟಕದ ಧೀಮಂತ ನಾಯಕರು. ಅವರು ನೂರಾರು ವರ್ಷಗಳ ಕಾಲ ಬಾಳಿ ಬದುಕಲಿ ಎಂದು ಹಾರೈಸುತ್ತಿರುವುದಾಗಿ ಹೇಳಿದರು.